ಹಾಜರಾತಿ ಪುಸ್ತಕ ಹಣೆಬರಹ ಬರೆದಿತ್ತು
ಹೆಸರಷ್ಟೇ ಅಲ್ಲ ಜೀವನವೆ ಹೊಸೆದಿತ್ತು!
ವಿಜ್ಞಾನ ಗಣಿತ ಕಬ್ಬಿಣದ ಕಡಲೆಯಾಗಿತ್ತು
ಬದುಕಿನ ಕೆಮಿಸ್ಟ್ರಿಯೋ - ಜೀವನದ ಲೆಕ್ಕಾಚಾರವೋ
ಕಲಿಸಿಯೇ ಬಿಟ್ಟಿತು ಜೀವನ
ಇಂಗ್ಲಿಷಿನ ಗುಂಗಿನಲ್ಲಿ ಕೈ ಹಿಡಿದಿದ್ದು ಮಾತ್ರ ಕನ್ನಡವೇ!
ಸ್ಪರ್ಧೆಗಿಳಿದರೆ ಬೇರೆ ಶಾಲೆಗಳೆಲ್ಲ ವೈರಿಯಂತೆ
ಶಾಲೆ ಮುಗಿಸಿ ಮನೆ ದಾರಿ ಹಿಡಿದಾಗ
ಒಬ್ಬರ ಹೆಗಲ ಮೇಲೆ ಇನ್ನೊಬ್ಬರ ಕೈ!!
ಉಳಿದ ನಾಳೆಗಳಿಗೆ ಆಗುವಷ್ಟಿದೆ
ಅಳಿಯದೆ ಉಳಿದ ನೆನಪಿನ ರಾಶಿ
ಅಗೆದು ಬಗೆದರು ಮುಗಿಯದ ನಿಧಿಗೆ
ಒಂದು ನಮನ - ನಮ್ಮನೆಲ್ಲ ಪೋಣಿಸಿದ ವಿಧಿಗೆ!!
- ಲೋಕೇಶ