ವಿಷ್ಣುಶರ್ಮನು ಜೀವನದಲ್ಲಿ ಎದುರಾಗುವ ನಾನಾ ಬಗೆಯ ಸಂಧರ್ಭ ಸಂಕಷ್ಟಗಳನ್ನು ಜಾಣತನದಿಂದ ಬಗೆಹರಿಸಲು ಸಾಧ್ಯವಾಗುವ ಹಾಗೆ ಐದು ಬಗೆಯ ತಂತ್ರಗಳನ್ನು, ಕತೆಗಳ ರೂಪದಲ್ಲಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿದನು.
ಮಿತ್ರಭೇದ : ಮಿತ್ರರ ನಡುವೆ ಒಡಕು ತಂದು ಕಾರ್ಯ ಸಾಧಿಸುವುದು. ಕಾಡಿನ ರಾಜ ಸಿಂಹ ಹಾಗು ಒಂದು ಎತ್ತಿನ ಸ್ನೇಹದಿಂದಾದ ತೊಂದರೆ, ಒಂದು ಜಾಣ ನರಿಯು ಅವುಗಳ ಸ್ನೇಹವನ್ನು ಒಡೆದು ಕಾಡಿನ ಒಳಿತನ್ನು ಸಾದಿಸಿದ ಕತೆ.